ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸ0ಘ (ನಿ) ಬಿ.ಸಿ ರೋಡ್ ಶಾಖೆ ಇದರ 7ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಗ್ರಾಹಕರಾದ ಶ್ರೀ ರಮಾನಾಥ ಕಾರಂದೂರು, ಶ್ರೀ ರೋನಾಲ್ಡ್ ಡಿ’ಸೋಜ ಮತ್ತು ಶ್ರೀಮತಿ ಪ್ರೇಮರವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಗ್ರಾಹಕರಾದ ಶ್ರೀ ರೋನಾಲ್ಡ್ ಡಿ’ಸೋಜರವರು “ಸಂಘದ ಸಿಬ್ಬಂದಿಗಳ ಶೀಘ್ರ ಹಾಗೂ ನಗು ಮೊಗದ ಸೇವೆ ಮತ್ತು ಆಡಳಿತ ಮಂಡಳಿಯವರ ಭಾವನಾತ್ಮಕ ಸೇವೆಯಿಂದ ಗ್ರಾಹಕರ ವ್ಯವಹಾರಕ್ಕೆ ಬಹಳ ಸಹಕಾರಿಯಾಗಿದೆ. ಈ ಸೇವೆ ಆತ್ಮಶಕ್ತಿ ಸಹಕಾರಿ ಸಂಘದಲ್ಲಿ ಸಿಗುತ್ತಿದೆ” ಎಂದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ ಸಂಘವು ಮಾಡಿರುವ ಸಾಧನೆ ಹಾಗೂ ಸಂಘವು ತಮ್ಮ ಗ್ರಾಹಕರಿಗೆ ನಿರಂತರವಾಗಿ ಆಯ್ದ ಸರಕಾರಿ ರಜಾ ದಿನಗಳಲ್ಲೂ ಇ-ಸ್ಟ್ಯಾಂಪ್ ಸೇವೆಯನ್ನು ನೀಡುತಿದ್ದು, ಸಂಘದ ಸದಸ್ಯರ ಅನುಕೂಲಕ್ಕಾಗಿ ವೇಗವಾಗಿ ಹಣ ವರ್ಗಾವಣೆ ಮಾಡುವ ಸೌಲಭ್ಯಗಳಾದ ಆರ್.ಟಿ.ಜಿ.ಎಸ್, ನೆಫ್ಟ್ ಸೇವೆಯನ್ನು ಸತತವಾಗಿ ನೀಡುತ್ತಾ ಬಂದಿದೆ. ಅಲ್ಲದೆ ಡಿಜಿಟಲ್ ಡಿ.ಡಿ , ಎಲ್‍ಐಸಿ, ರೆಲಿಗೇರ್ ಹೆಲ್ತ್ ಇನ್ಸುರೆನ್ಸ್, ಐಸಿಐಸಿಐ ಲಾಂಬರ್ಡ್ ಜನರಲ್ ಇನ್ಸುರೆನ್ ಕಂಪೆನಿಗಳ ವಿಮಾ ಸೌಲಭ್ಯಗಳು ಮುಂತಾದ ಗ್ರಾಹಕ ಸ್ನೇಹಿ ಸೇವೆಗಳನ್ನು ನೀಡುತ್ತಿದ್ದೇವೆ. ಈ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಶ್ರೀ ಆನಂದ ಎಸ್ ಕೊಂಡಾಣ, ಉಪಸ್ಥಿತರಿದ್ಧರು. ಸಂಘದ ಶಾಖಾಧಿಕಾರಿಯಾದ ಶ್ರೀಮತಿ ಯಶವಂತಿ ಕಾರ್ಯಕ್ರಮ ನಿರ್ವಹಿಸಿ, ಸಂಘದ ಸಿಬ್ಬಂದಿ ಶ್ರೀಮತಿ ಚಿತ್ರಾವತಿಯವರು ವಂದನಾರ್ಪಣೆ ಮಾಡಿದರು.